ಕಾಮತರ ಹೋಟೆಲು

ಹೋಟೆಲುಗಳೇಳುತ್ತವೆ ಹೊಟ್ಟೆಗಳ ಮೇಲೆ
ಎದ್ದು ಪೇಟೆ ಪಟ್ಟಣಗಳನ್ನು ಆಕ್ರಮಿಸಿಬಿಡುತ್ತವೆ!
ಆದರೆ ನಮ್ಮೂರ ಕಾಮತರ ಹೋಟೆಲು ಮಾತ್ರ
ಬೆಳೆದೂ ಬೆಳೆಯದಂತಿದೆ

ಇದು ವಸ್ತುಗಳ ಸ್ಥಿತಿಸ್ಥಾಪಕ ಗುಣದಲ್ಲಿ
ನನ್ನ ನಂಬಿಕೆಯನ್ನು ಹೆಚ್ಚಿಸಿದೆ
ಎಲ್ಲಾ ಕಳೆದು ಹೋಯಿತು ಎಂದಾಗ
ಇಲ್ಲ ಇನ್ನೂ ಇಲ್ಲ ಎನ್ನುವಂತೆ

ಬಾಣಲೆಯಲ್ಲಿ ಪೂರಿಗಳು ಕುಣಿದಾಡುತ್ತವೆ
ಭಜಿಗಳು ಕರಿಯುತ್ತವೆ–ಮುಳುಕಗಳು
ಮುಳುಗಿ ಏಳುತ್ತವೆ! ಅವು
ನಮ್ಮೆದುರು ಬರುವುದನ್ನೆ ಕಾಯುತ್ತೇವೆ

ವೇಣು, ಗಂಗಾಧರ ಹಾಗೂ ತಿಂಡಿಪೋತ ಶಂಕರ!
ಗಂಗಾಧರನ ಬಳಿ ನಿನ್ನೆಯಿಂದಲೂ
ಅತ ರಚಿಸತೊಡಗಿದ ಕವಿತೆ-ಅದರ ಅಕ್ಷರಗಳು ಸಹ
ಹಸಿವಿನಿಂದ ಎದ್ದು ಕುಳಿತಂತಿವೆ!

ನನ್ನ ಜೇಬಿನಲ್ಲೊಂದು ಹತ್ತರ ನೋಟು-ಮೊದಲ
ಪದ್ಯಕ್ಕೆ ಬಂದ ದುಡ್ಡು ! ಕಾಮತರ
ಗಲ್ಲಾ ಪೆಟ್ಟಿಗೆ ಯಾವಾಗ ಸೇರುವೆನೋ
ಎಂದು ಕಾತರದಿಂದಿದೆ!

ಕಾಮತರು ಮಾತ್ರ ಇದೆಲ್ಲದರ ಮಧ್ಯೆ
ಬುದ್ಧನಂತಿದ್ದಾರೆ ಎತ್ತರದ ಪೀಠದ ಮೇಲೆ
ನಾವು ತಿಳಿದಾಗಿನಿಂದಲೂ
ಹೀಗೆಯೇ ಇದ್ದಾರೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಸೂಯೆ
Next post ಒಂದೇ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

cheap jordans|wholesale air max|wholesale jordans|wholesale jewelry|wholesale jerseys